Our Story
ವೃಕೋದರ ಪ್ರಕಾಶನದ ಪರಿಕಲ್ಪನೆ ಶ್ರೀಯುತ ಸಂಮ್ಮೋದ ವಾಡಪ್ಪಿಯವರದ್ದು. ವಿರಭ್ ರಿಸರ್ಚ್ ಸೊಲ್ಯೂಶನ್ಸ್ & ಕನ್ಸಲ್ಟೆನ್ಸಿ ಪ್ರಾ. ಲಿ. ಎಂಬ ಮಾರ್ಕೆಟ್ ರಿಸರ್ಚ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಇವರು ಬಾಲ್ಯದಿಂದಲೇ ಮನೆಯಲ್ಲಿ ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದವರು. ಅಜ್ಜ ದಿ|| ಬಿ.ಆರ್. ವಾಡಪ್ಪಿ ಅವರು ಲಲಿತ ಪ್ರಬಂಧಗಳ ಪಿತಾಮಹ ಎನ್ನಬಹುದು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಪುರಸ್ಕೃತ ದಿ|| ಬಿ.ಆರ್. ವಾಡಪ್ಪಿಯವರ ಮೊಮ್ಮಗ ಸಂಮ್ಮೋದ ಅವರಿಗೆ ಅವರ ಕಾವ್ಯ ರಚನೆಗೆ ಉತ್ತೇಜನ ನೀಡುತ್ತಿದ್ದರು. ಸಂಮ್ಮೋದ ಅವರ ಅನೇಕ ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಬಾಲ್ಯದಿಂದಲೇ ಪ್ರಕಟವಾಗುತ್ತಿವೆ. ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಕೃಷಿ ಮಾಡುವ ಅಭಿಲಾಷೆ ಹೊಂದಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಗಳು ವಿಭಿನ್ನ. ಈಗಾಗಲೇ ಕೆಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬರಹಗಾರರಿಗೆ ಉತ್ತಮ ಅವಕಾಶ ಕಲ್ಪಿಸಬೇಕು ಮತ್ತು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಕಾಶನ ಕಾರ್ಯೋನ್ಮುಖವಾಗಲಿದೆ.
ವೃಕೋದರ ಪ್ರಕಾಶನ ವೇದಿಕೆಯ ಮಾರ್ಗದರ್ಶಕರು, ಕಾರ್ಯಕಾರಿಣಿ ಸದಸ್ಯರು

ಸಂಮ್ಮೋದ ವಾಡಪ್ಪಿ
ಸಂಸ್ಥಾಪಕರು & ಅಧ್ಯಕ್ಷರು
ವೃಕೋದರ ಪ್ರಕಾಶನ

ಶ್ರೀದೇವಿ ವಾಡಪ್ಪಿ
ಆಡಳಿತ ಮಂಡಳಿ
ವೃಕೋದರ ಪ್ರಕಾಶನ

ದೀಪಾ ಜೋಶಿ
ಸಾಹಿತಿ, ಕತೆಗಾರ್ತಿ – ಮಾರ್ಗದರ್ಶಕರು
ವೃಕೋದರ ಪ್ರಕಾಶನ

ಬಸವರಾಜ ಹುರಕಡ್ಲಿ
ಆಡಳಿತ ಮಂಡಳಿ
ವೃಕೋದರ ಪ್ರಕಾಶನ

ಸುರಭಿ ಮಾಡ್ಯಾಳ್ಕರ
(ರಂಜನಾ ವಾಡಪ್ಪಿ)
ಸಲಹಾ ಸಮಿತಿ
ವೃಕೋದರ ಪ್ರಕಾಶನ